ಜಯಣ್ಣ ಕಂಬೈನ್ಸ್ ಅವರಿಂದ ಮತ್ತೊಂದು ಅದ್ಧೂರಿ ಸಾಹಸಮಯ ಚಿತ್ರ ‘ರಣ ವಿಕ್ರಮ’ ಈ ವಾರ ಭರ್ಜರಿ ಆಗಿ ತೆರೆ ಕಾಣುತ್ತಿದೆ. ನಿರ್ಮಾಪಕ ಜಯಣ್ಣ ಹಾಗೂ ಭೋಗೇಂದ್ರ ಅವರ ಬಹುಕೋಟಿ ನಿರ್ಮಾಣದ ಚಿತ್ರ ಈಗಾಗಲೇ ಅತಿ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ. ಅದಕ್ಕೆ ಕಾರಣ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಎರಡು ಸೂಪರ್ ಹಿಟ್ ಚಿತ್ರಗಳ (ಗೋವಿಂದಾಯನಮಹ ಹಾಗೂ ಗೂಗ್ಲಿ) ನಿರ್ದೇಶಕ ಪವನ್ ವಡೆಯರ್.
99 ದಿವಸಗಳಲ್ಲಿ ಬೆಂಗಳೂರು, ಬಳ್ಳಾರಿ, ಇಟಲಿ, ತೋರಣಂಗಲ್ ಜಿಂದಾಲ್ ಸ್ಟೀಲ್ ಕಾರ್ಖಾನೆ ಅಲ್ಲಿ ಚಿತ್ರೀಕರಣ ಮಾಡಿದ ವೈಧಿ ಅವರ ಛಾಯಾಗ್ರಹಣದ, ನಾಲ್ಕು ಹಾಡುಗಳಿಗೆ ವಿ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿರುವ ‘ರಣ ವಿಕ್ರಮ’ ಏಕ ಕಾಲದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಸುರೇಶ್ ಅವರ ಸಂಕಲನ, ರವಿ ವರ್ಮ ಅವರ ಸಾಹಸ ಒಳಗೊಂಡಿರುವ ಈ ಚಿತ್ರ ಈಗಾಗಲೇ ಬೇಡಿಕೆಯನ್ನು ಸಹ ಗಳಿಸಿಕೊಂಡಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಾಯಕಿಯರಾಗಿ ಅಂಜಲಿ ಹಾಗೂ ಆದ ಶರ್ಮ ಇದ್ದಾರೆ. ಹಿಂದಿ ಸಿನಿಮಾದ ವಿಕ್ರಮ್ ಸಿಂಗ್ ಜೊತೆ ಖಳ ನಟರಾಗಿ ದಿನೇಷ್ ಮಂಗಳೂರು ಹಾಗೂ ಮಂಜುನಾಥ್ ಇದ್ದಾರೆ.
ಪೋಷಕ ಪಾತ್ರಗಳಲ್ಲಿ ಡಾಕ್ಟರ್ ಗಿರೀಷ್ ಕಾರ್ನಾಡ್, ಮುಖ್ಯಮಂತ್ರಿ ಚಂದ್ರು, ಅವಿನಾಷ್, ರಂಗಾಯಣ ರಘು, ಅಶೋಕ್, ಸುಧ ಬೆಳವಾಡಿ, ಶ್ರೀಧರ್ ಕೇಸರಿ, ಲಕ್ಷ್ಮಣ್, ರವಿ ವರ್ಮ ಹಾಗೂ ಇತರರು ಇದ್ದಾರೆ.